ನಿನಗೆ ನಾನು ಸಾಕಾಗದಾ?

ಸಂಬಂಧದಲ್ಲಿ ಸೌಂದರ್ಯ ಮಾನದಂಡವಾಗುವ ಮೌನ ದುರಂತ “ನಿನಗೆ ನಾನು ಸಾಕಾಗದಾ?” ಈ ಪ್ರಶ್ನೆ ಮುಖದ ಬಗ್ಗೆ ಅಲ್ಲ.ಇದು ಸ್ವೀಕಾರದ ಬಗ್ಗೆ. ಪ್ರತಿ ಸಂಬಂಧದ ಒಳಗೆಯೂ ಒಂದು ಮೌನ ಅಳತೆ ಕೆಲಸ ಮಾಡುತ್ತದೆ. ಕೆಲವೊಮ್ಮೆ ಅದು ಗುಣ, ಮೌಲ್ಯ, ನಿಷ್ಠೆ, ವ್ಯಕ್ತಿತ್ವವನ್ನು ಅಳೆಯುತ್ತದೆ. ಆದರೆ ಕೆಲವೊಮ್ಮೆ — ಸೌಂದರ್ಯವೇ ಮಾನದಂಡವಾಗುತ್ತದೆ. ಅಲ್ಲಿ ದುರಂತ ಆರಂಭವಾಗುತ್ತದೆ. ಪ್ರೇಮದಲ್ಲಾಗಲಿ, ವಿವಾಹದಲ್ಲಾಗಲಿ, ದಾಂಪತ್ಯದಲ್ಲಾಗಲಿ — ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ನಿರಾಕರಿಸಬೇಕು? ಈ ತೀರ್ಮಾನಗಳಲ್ಲಿ ಸೌಂದರ್ಯ ಮೌನ ಜರಡಿ ಆಗಿಬಿಟ್ಟರೆ, ಆತ್ಮಗೌರವವೇ ಮೊದಲ … Read more

ನಾನು ಯಾಕೆ ಸುಂದರವಾಗಿಲ್ಲ?

ಆತ್ಮಗೌರವವನ್ನು ಮರಳಿ ಕಂಡುಕೊಳ್ಳುವ ಅವಲೋಕನ “ನಾನು ಯಾಕೆ ಸುಂದರವಾಗಿಲ್ಲ?” ಈ ಪ್ರಶ್ನೆ ಕನ್ನಡಿಯ ಮುಂದೆ ಹುಟ್ಟುವುದಿಲ್ಲ.ಇದು ಹೋಲಿಕೆಯ ನಂತರ ಹುಟ್ಟುತ್ತದೆ. ಒಬ್ಬರನ್ನು ನೋಡಿ.ಒಂದು ಫೋಟೋ ನೋಡಿ.ಒಂದು comment ಕೇಳಿ. ಅಲ್ಲೇ ನಮ್ಮ ಮನಸ್ಸು ನಿಧಾನವಾಗಿ ಕೇಳುತ್ತದೆ —“ನಾನು ಯಾಕೆ ಅವರಂತಿಲ್ಲ?” ಆ ಕ್ಷಣದಲ್ಲಿ ಸುಂದರತೆ ಸಮಸ್ಯೆಯಾಗುವುದಿಲ್ಲ.ಹೋಲಿಕೆ ಸಮಸ್ಯೆಯಾಗುತ್ತದೆ. ಸುಂದರತೆ ಹುಟ್ಟಿದ ಕ್ಷಣ ನಾವು ಹುಟ್ಟಿದಾಗನಮಗೆ ನಮ್ಮ ಮುಖದ ಬಗ್ಗೆ ಅಭಿಪ್ರಾಯ ಇರೋದಿಲ್ಲ. “ಸುಂದರ” ಅನ್ನೋ ಪದಹೊರಗಿನಿಂದ ಬರುತ್ತದೆ. ನಮ್ಮ ಆತ್ಮಮೌಲ್ಯ ನಮ್ಮ ಕನ್ನಡಿಯಲ್ಲಿ ರೂಪುಗೊಳ್ಳುವುದಿಲ್ಲ.ಅದು ಸಮಾಜದ ಪ್ರತಿಬಿಂಬದಲ್ಲಿ … Read more

ಕೌತುಕ: ಮಗು ಮತ್ತು ಮಂಗಟ್ಟೆ ಹಕ್ಕಿಯ ಮಧ್ಯೆ ನಾವು ಎಲ್ಲಿದ್ದೇವೆ?

ಪರಿಸರದ ಕುರಿತು ನಾವು ಮಾತನಾಡುವಾಗ ಸಾಮಾನ್ಯವಾಗಿ ಅಂಕಿಅಂಶಗಳು, ನಾಶವಾಗುತ್ತಿರುವ ಅರಣ್ಯಗಳು, ಹವಾಮಾನ ಬದಲಾವಣೆಗಳ ಬಗ್ಗೆ ಚರ್ಚಿಸುತ್ತೇವೆ. ಆದರೆ ಒಂದು ಮಗು ಮತ್ತು ಒಂದು ಹಕ್ಕಿಯ ನಡುವೆ ಮೂಡುವ ಸಂಬಂಧದ ಮೂಲಕ ಪರಿಸರದ ಆತ್ಮವನ್ನು ತೋರಿಸಬಹುದೇ? ಯುವ ನಿರ್ದೇಶಕ ಪ್ರಶಾಂತ್ ಸಾಗರ್ ಅವರ ‘ಕೌತುಕ’ ಅದನ್ನೇ ಮಾಡುತ್ತದೆ. ದಾಂಡೇಲಿಯ ಕಾಡು ಇಲ್ಲಿ ಕೇವಲ ಹಿನ್ನೆಲೆ ಅಲ್ಲ — ಅದು ಜೀವಂತ ಸಾನ್ನಿಧ್ಯ. ಕುಣಬಿ ಜನಾಂಗದ ಬದುಕು, ಅವರ ಪರಂಪರೆಯ ಬೇಟೆ ಸಂಸ್ಕೃತಿ, ಸರಕಾರಿ ಶಾಲೆಯ ಪ್ರಾದೇಶಿಕ ಶಿಕ್ಷಣ ವಾತಾವರಣ … Read more

ಅಂಡರ್ ದ ವೊಲ್ಕ್ಯಾನೊ: ಯುದ್ಧ ಹೊರಗಲ್ಲ… ಒಳಗೇ ಸ್ಫೋಟಗೊಳ್ಳುತ್ತದೆ!

Under the Volcano ಪೊಲಾಂಡ್‌ನ ನಿರ್ದೇಶಕ ಡೆಮಿಯನ್ ಕೊಕುರ್ ಅವರ ಈ ಚಿತ್ರ, ದೃಶ್ಯಕಾವ್ಯದ ಮೂಲಕ ಮನುಷ್ಯನ ಅಂತರಂಗದ ಅಗಾಧತೆಯನ್ನು ಅನಾವರಣಗೊಳಿಸುತ್ತದೆ. ಮೂಲತಃ ಸಿನಿಮಾಟೋಗ್ರಾಫರ್ ಆಗಿರುವ ಕೊಕುರ್, ಸಮುದ್ರವನ್ನು ಕೇವಲ ದೃಶ್ಯವಾಗಿ ಅಲ್ಲ, ಮನಸ್ಸಿನ ರೂಪಕವಾಗಿ ಬಳಸುತ್ತಾರೆ. ಅದಕ್ಕೇ ಇಡೀ ಸಿನಿಮಾ ಒಂದು ಮೌನ ಕಾವ್ಯವಾಗಿ ಹರಿಯುತ್ತದೆ. ಉಕ್ರೇನ್‌ನ ಕೊವಲೆಂಕೊ ಕುಟುಂಬ ಸ್ಪೇನಿನ ಟೆನೆರಿಫೆ ದ್ವೀಪದಲ್ಲಿ ಪ್ರವಾಸದಲ್ಲಿದೆ. ಊರಿಗೆ ಮರಳುವ ಕ್ಷಣ ಹತ್ತಿರವಾಗಿರುವಾಗಲೇ ರಷ್ಯಾ–ಉಕ್ರೇನ್ ಯುದ್ಧ ಘೋಷಣೆಯಾಗುತ್ತದೆ. ವಿಮಾನಗಳು ಸ್ಥಗಿತಗೊಳ್ಳುತ್ತವೆ. ಹಿಂತಿರುಗಲಾರರು. ಇದ್ದಲ್ಲಿಯೂ ಇರಲಾರರು. ಅನಿಶ್ಚಿತತೆ ಅವರ … Read more

ಅತಿಯಾದ ಸಾಮಿಪ್ಯದಲ್ಲಿ ನಾವು ಕಳೆದುಕೊಳ್ಳುವುದೇನು?

ಸಂಬಂಧಗಳು ನಮ್ಮ ಜೀವನದ ಪ್ರಮುಖ ಭಾಗ. ಕುಟುಂಬ, ಸ್ನೇಹ, ದಾಂಪತ್ಯ, ಕೆಲಸದ ಸಂಬಂಧಗಳು — ಎಲ್ಲವೂ ನಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಸಂಬಂಧಗಳು ಆರೋಗ್ಯಕರವಾಗಿರಲು ಕೇವಲ ಪ್ರೀತಿ ಸಾಕಾಗುವುದಿಲ್ಲ. ಗಡಿಗಳು (Boundaries) ಕೂಡ ಅಗತ್ಯ. ಗಡಿಗಳು ಎಂದರೆ ದೂರ ಇಡುವ ಗೋಡೆಗಳು ಅಲ್ಲ. ಅವು ನಮ್ಮನ್ನು ಕಾಪಾಡುವ ರೇಖೆಗಳು. ಗಡಿ ಎಂದರೆ ಏನು? ಗಡಿ ಎಂದರೆ ನಮಗೆ ಯಾವ ವರ್ತನೆ ಒಪ್ಪಿಗೆಯಾಗಿದೆ, ಯಾವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಉದಾಹರಣೆಗೆ ಒಬ್ಬ ಸ್ನೇಹಿತ ಪದೇಪದೇ ರಾತ್ರಿ … Read more

ಮೈ ಫಾದರ್ಸ್ ಶ್ಯಾಡೋವ್: ತಂದೆಯ ನೆರಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ?

ಯುಕೆಯ ಅಕಿನೊವಾ ಡೇವಿಸ್ (ಜ್ಯೂ) ನಿರ್ದೇಶನದ ಮೈ ಫಾದರ್ಸ್ ಶ್ಯಾಡೋವ್ ,ನೈಜೀರಿಯಾದಲ್ಲಿ ನಡೆಯುವ ವಾಸ್ತವಾಧಾರಿತ ಆಂಗ್ಲ ಸಿನಿಮಾ. ಮಿಲಿಟರಿ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಉದಯಿಸಬೇಕು ಎಂಬ ಕನಸಿನ ಹೊತ್ತಿನಲ್ಲಿ ಬದುಕುತ್ತಿರುವ ಹೋರಾಟಗಾರ ಪೋಲಾ ಇದರ ಕೇಂದ್ರ ಪಾತ್ರ. ತನ್ನ ಹದಿಹರೆಯದಲ್ಲೇ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ, ಇಬ್ಬರು ಮಕ್ಕಳ ತಂದೆಯಾಗಿರುವ ಪೋಲಾ ಹೊರನೋಟಕ್ಕೆ ಯಶಸ್ವಿ ಕುಟುಂಬಸ್ಥ. ಆದರೆ ಒಳಗೆ ಅವನು ಬದುಕುತ್ತಿರುವುದು ತೀವ್ರ ಸಂಘರ್ಷಗಳ ಮಧ್ಯೆ. ೧೧ ವರ್ಷದ ಹಿರಿಯ ಮಗ ತನ್ನದೇ ಲೋಕದಲ್ಲಿ ಮುಳುಗಿರುವವನು. ಅವನ ಮುಖದಲ್ಲಿ … Read more

ನಮ್ಮ ಭಾವನೆಗಳನ್ನು ಗೌರವಿಸಿದರೆ ಬದುಕು ಬದಲಾಗುತ್ತದೆಯೇ?

ಕನ್ನಡಿ ಮುಂದೆ ತನ್ನ ತಲೆಯ ಮೇಲೆ ಕಿರೀಟವನ್ನು ಇಡುವ ವ್ಯಕ್ತಿ – ಸ್ವಯಂ ಅರಿವು ಮತ್ತು ಭಾವನಾತ್ಮಕ ಗೌರವದ ಪ್ರತೀಕ

ಭಾವನೆಗಳು ಮಾನವನ ಜೀವನದ ಅವಿಭಾಜ್ಯ ಅಂಗ. ಸಂತೋಷ, ದುಃಖ, ಕೋಪ, ಭಯ, ನಿರಾಶೆ, ಪ್ರೀತಿ ಎಲ್ಲವೂ ಮಾನವ ಅನುಭವದ ಸಹಜ ಅಂಶಗಳು. ಆದರೂ ಬಹುಮಂದಿ ತಮ್ಮ ಭಾವನೆಗಳೊಂದಿಗೆ ಹೇಗೆ ಇರಬೇಕು ಎಂಬುದನ್ನು ಕಲಿಯದೇ ದೊಡ್ಡವರಾಗುತ್ತಾರೆ. ಕೆಲವರು ಭಾವನೆಗಳನ್ನು ಮರೆಮಾಡುತ್ತಾರೆ, ಕೆಲವರು ಒತ್ತಿಹಿಡಿಯುತ್ತಾರೆ, ಇನ್ನೂ ಕೆಲವರು ಅತಿಯಾಗಿ ಹೊರಹಾಕುತ್ತಾರೆ. ಈ ಎಲ್ಲದ ಮಧ್ಯೆ ಇರುವ ಸಮತೋಲನದ ಮಾರ್ಗವೇ ಭಾವನಾತ್ಮಕ ಅರಿವು (Emotional Awareness). ಭಾವನಾತ್ಮಕ ಅರಿವು ಎಂದರೆ ಭಾವನೆಗಳನ್ನು ನಿಯಂತ್ರಿಸುವುದು ಅಲ್ಲ. ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು. ಇದು ನಮ್ಮೊಳಗೆ ಉದಯಿಸುವ … Read more

ಮನರಂಜನೆಯ ಹೆಸರಲ್ಲಿ ಸದ್ದಿಲ್ಲದೇ ಅಳಿಯುತ್ತಿರುವುದೇನು?

ಮನರಂಜನೆಯ ಹೆಸರಿನಲ್ಲಿ ನಡೆಯುವ ಮೌನವಾದ ಅಳಿವು, ಉಳಿಯುವಿಕೆ ಮತ್ತು ಗೌರವದ ನಡುವಿನ ಸಂಘರ್ಷವನ್ನು ಪ್ರಶ್ನಿಸುವ ಒಂದು ಸಾಮಾಜಿಕ ಪ್ರತಿಬಿಂಬ.

ಗಡಿಗಳನ್ನು ಇಡುವುದು ಸ್ವಾರ್ಥವೇ ಅಥವಾ ಆತ್ಮರಕ್ಷಣೆಯೆ?

ಮನೆಯಲ್ಲಿ ಕೆಲಸದ ಒತ್ತಡದಿಂದ ದಣಿದ ಮಹಿಳೆ – ಸಂಬಂಧಗಳಲ್ಲಿ ಗಮನ ಮತ್ತು ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯನ್ನು ಸೂಚಿಸುವ ಚಿತ್ರ

🏠 ಅಮ್ಮ: ಮನೆಯ ಸೂಪರ್ ಹೀರೊ… ಆದರೆ ತನ್ನೊಳಗೆ ಕಾಣೆಯಾದವಳು ಆಕೆ ಅಮ್ಮ. ಮನೆಯ ಸೂಪರ್ ಹೀರೊ. ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು–ಹನ್ನೆರಡು ಗಂಟೆಯವರೆಗೂ ಅವಳ ದಿನ ನಿಲ್ಲುವುದಿಲ್ಲ. ಹಣ ಇಲ್ಲದಾಗ ಹಣ ಹೊಂದಿಸುವವಳು. ಯಾರಿಗಾದರೂ ಹುಷಾರಿಲ್ಲದಾಗ ಮಿನಿ ಆಸ್ಪತ್ರೆ. ಮನೆ ಸ್ವಚ್ಛಗೊಳಿಸುವವಳು.ಅಡುಗೆಯವಳು. ಅಟೆಂಡರ್. ಡ್ರೈವರ್. ಎಲ್ಲವೂ ಅವಳೇ. ಆದರೆ ಆಕೆ ಐದು ನಿಮಿಷ ಟಿವಿ ನೋಡಲು ಕುಳಿತರೂ— “ಅಮ್ಮ, ಅದು ಬೇಕು…”“ಅಮ್ಮ, ಇದು ಕೊಡು…”“ಅಮ್ಮ, ಇಲ್ಲಿಗೆ ಬಾ…” ಒಂದು ನಿಮಿಷವೂ ನಿಶ್ಚಲವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. … Read more

ಹಣಕ್ಕಾಗಿ ಅಸ್ತಿತ್ವವನ್ನೇ ಗಿರವಿ ಇಡುತ್ತಿದ್ದೇನೆಯೇ?

ಹಣದ ಒತ್ತಡದಲ್ಲಿ ಸಿಲುಕಿದ ವ್ಯಕ್ತಿ – ಅಸ್ತಿತ್ವ ಮತ್ತು ಹಣದ ನಡುವಿನ ಸಂಘರ್ಷದ ಪ್ರತೀಕ

ಸಮಾಜದಲ್ಲಿ ಒಂದು ಅಸ್ತಿತ್ವವನ್ನು ಕಂಡುಕೊಳ್ಳಬೇಕಾದರೆ ಆರ್ಥಿಕ ಸ್ವಾವಲಂಬನೆ ಎಷ್ಟು ಮುಖ್ಯ, ಅದಿಲ್ಲದಿದ್ದರೆ
ಹಣ ವ್ಯಕ್ತಿಯ ಅಸ್ತಿತ್ವವನ್ನು ಹೇಗೆ ನಿಯಂತ್ರಿಸುತ್ತದೆ ಎಂಬ ಅವಲೋಕನ

error: Content is protected !!