ಹೀಗೊಂದು ಬೆಳಗು…

82 ವರ್ಷದ ತಿಮ್ಮಯ್ಯ ಅವರು ತಲೆಯ ಮೇಲೆ ಸುಮಾರು 30 ಕೆಜಿ ಕಡ್ಡಿ ಪೊರಕೆ ಹೊತ್ತು ಮೈಸೂರಿನಲ್ಲಿ ಮಾರಾಟಕ್ಕೆ ತೆರಳುತ್ತಿರುವ ದೃಶ್ಯ.

ಪ್ರತಿದಿನ ಬೆಳಿಗ್ಗೆ ಸುಮಾರು ಆರು ಗಂಟೆಗೆ ನನ್ನ ಮಿತ್ರ ಮಾರುತಿಯೊಂದಿಗೆ ಒಂದು ಸುತ್ತು ಮೈಸೂರಿನ ಸಬರ್ಬ್ ಬಸ್ ನಿಲ್ದಾಣದವರೆಗೆ ಹೋಗಿಬರುವ ಅಭ್ಯಾಸವಿದೆ. ಆ ಬೆಳಗಿನ ದಿನಚರಿಯಲ್ಲಿ ನನಗೆ ಪ್ರತಿದಿನ ಕಾಣಿಸಿಕೊಳ್ಳುವ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ತಿಮ್ಮಯ್ಯ. ಬೆಳಿಗ್ಗೆ ಐದು ಗಂಟೆಗೆ ಎದ್ದು, ಸುಮಾರು ಮೂವತ್ತು ಕೆಜಿ ತೂಕದ ಕಡ್ಡಿ ಪೊರಕೆಯ ಮೆದೆಯನ್ನು ತಲೆಯ ಮೇಲೆ ಹೊತ್ತು ಇಲವಾಲದಿಂದ ಹೊರಡುತ್ತಾರೆ. ನಂತರ ಇಡೀ ಬೆಳಿಗ್ಗೆ ಮೈಸೂರು ನಗರದ ವಿವಿಧ ಕಡೆಗಳಲ್ಲಿ ತಿರುಗುತ್ತಾ ಆ ಮೆದೆಯನ್ನು ಮಾರುತ್ತಾರೆ. … Read more

ಅಂತರ್ಜಾತಿ ಮದುವೆ: ಪ್ರೀತಿ vs ಜಾತಿ – ಸಮಾಜದ ನಿಜವಾದ ಸಮಸ್ಯೆ ಏನು?

ಭಾರತೀಯ ಸಮಾಜದಲ್ಲಿ ಒಂದು ವಿಚಿತ್ರ ಸಂಗತಿ ಕಾಣಿಸುತ್ತದೆ. ನಾವು ದೇವಾಲಯಗಳಲ್ಲಿ, ಧರ್ಮಗ್ರಂಥಗಳಲ್ಲಿ, ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಆದರೆ ಮದುವೆಯ ವಿಷಯ ಬಂದಾಗ ಮಾತ್ರ “ನಮ್ಮ ಜಾತಿ”, “ನಮ್ಮ ಕುಲ”, “ನಮ್ಮ ಸಂಪ್ರದಾಯ” ಎಂಬ ಗೋಡೆಗಳು ಏಕಾಏಕಿ ಎದ್ದು ನಿಂತುಕೊಳ್ಳುತ್ತವೆ. ಹಾಗಾದರೆ ಪ್ರಶ್ನೆ –ಅಂತರ್ಜಾತಿ ಮದುವೆಗಳಿಗೇಕಿಷ್ಟು ವಿರೋಧ? ೧. ಜಾತಿ ಅಂದರೆ ಕೇವಲ ಪರಂಪರೆ ಅಲ್ಲ – ಒಂದು ಸಾಮಾಜಿಕ ವ್ಯವಸ್ಥೆ ಜಾತಿ ವ್ಯವಸ್ಥೆ ಶತಮಾನಗಳಿಂದ ಕೇವಲ ಗುರುತು ಮಾತ್ರವಲ್ಲ, ಅದು ಒಂದು ಸಾಮಾಜಿಕ ನಿಯಂತ್ರಣ … Read more